ನಾಳೆಯಿಂದ ತೆರೆಗೆ ‘ರಿಂಗ್‌ಮಾಸ್ಟರ್
Posted date: 08 Thu, Oct 2015 – 10:16:59 AM

ಉಪ್ಪಿ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ಅರ್ಪಿಸುವ,  ಸತ್ಯನಾರಾಯಣ, ಬಸವರಾಜು, ನರಸಿಂಹಮೂರ್ತಿ  ಹಾಗೂ ಚೇತನ್ ಅವರು  ನಿರ್ಮಿಸಿರುವ ‘ರಿಂಗ್‌ಮಾಸ್ಟರ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿಶೃತ್ ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಅರುಣ್‌ಸಾಗರ್ ಅಭಿನಯಿಸಿದ್ದಾರೆ. ಅನುಶ್ರೀ, ಶೃಂಗ, ಶ್ವೇತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರವಿ ಬಸ್ರೂರು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಹರೀಶ್ ಗಿರಿಗೌಡ ಸಂಕಲನ, ಅರುಣ್‌ಸಾಗರ್ ಕಲಾ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು  ವಿಶೃತ್ ನಾಯಕ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed